ಟ್ರೆಂಡಿಂಗ್ ಸುದ್ದಿಗಳು
ಮೇ 28 ರಂದು ನಾರಾವಿಯಲ್ಲಿ ಶ್ರೀ ಸೂರ್ಯ ನಾರಾಯಣ ದೇವರ ದ್ರುಢ ಕಲಶಾಭಿಷೇಕ

ಈ ಪವಿತ್ರ ಧಾರ್ಮಿಕ ಕಾರ್ಯಕ್ರಮವು ಗುರುವಾರ, ದಿನಾಂಕ 28-05-2026 ರಂದು ಬೆಳಿಗ್ಗೆ 8.00 ಗಂಟೆಗೆ ಆರಂಭವಾಗಲಿದೆ. ಕಾರ್ಯಕ್ರಮದ ಅಂಗವಾಗಿ ವೈದಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ, ಅಲಂಕಾರ, ಮಂತ್ರೋಚ್ಚಾರಣೆ, ಮಂಗಳಾರತಿ ಹಾಗೂ ದ್ರುಢ ಕಲಶಾಭಿಷೇಕ ಸೇವೆಗಳು ಶ್ರದ್ಧಾಭಕ್ತಿಯಿಂದ ನೆರವೇರಲಿವೆ.
ಈ ದ್ರುಢ ಕಲಶಾಭಿಷೇಕದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಆರೋಗ್ಯ, ಆಯುರಾರೋಗ್ಯ, ಐಶ್ವರ್ಯ, ಸಂತಾನ ಸೌಭಾಗ್ಯ ಹಾಗೂ ಸಕಲ ಸಂಕಷ್ಟಗಳಿಂದ ನಿವೃತ್ತಿ ಲಭಿಸುವುದೆಂಬ ಗಾಢ ನಂಬಿಕೆ ಇದೆ. ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ..
ಈ ಶುಭ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಸೂರ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸೂರ್ಯನಾರಾಯಣ ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ಹಾಗೂ ಸೇವಾರ್ಥಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ

