ಶ್ರೀ ಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವೃತ ಧಾರಣೆ ಮಾಡುವಂತೆ ವಿನಂತಿಸಿ ಶ್ರೀಫಲ ಸಮರ್ಪಿಸಿ ಕ್ಷೇತ್ರಕ್ಕೆ ಆಹ್ವಾನಿಸುವ ಬಗ್ಗೆ
19-07-2026🏳️🌈🏳️🌈🏳️🌈🏳️🌈🦚🦚🦚🏳️🌈🏳️🌈🏳️🌈
*ಶ್ರೀ ಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವೃತ ಧಾರಣೆ ಮಾಡುವಂತೆ ವಿನಂತಿಸಿ ಶ್ರೀಫಲ ಸಮರ್ಪಿಸಿ ಕ್ಷೇತ್ರಕ್ಕೆ ಆಹ್ವಾನಿಸುವ ಬಗ್ಗೆ*
*ಧರ್ಮಬಂಧುಗಳೇ* *ಜೈ ಜಿನೇಂದ್ರ*
ಅತಿಶಯ ಕ್ಷೇತ್ರ ಸೂಡಿ ಶಿರ್ಲಾಲಿನ ವಿಹಾರದಲ್ಲಿರುವ ಪ.ಪೂ.೧೦೮ ಆಚಾರ್ಯ ಪುಷ್ಪದಂತ ಸಾಗರ ಮಹಾರಾಜರ ಪರಮ ಶಿಷ್ಯರಾದ
*ಏಲಾಚಾರ್ಯ ೧೦೮ ಪ್ರಸಂಗ ಸಾಗರ ಮಹಾರಾಜ* ರನ್ನು ಶ್ರೀ ಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವರ್ಷಾಯೋಗವನ್ನು ಕೈಗೊಳ್ಳುವಂತೆ ವಿನಂತಿಸಿ, ಶ್ರೀಫಲ ಸಮರ್ಪಿಸಿ ಕ್ಷೇತ್ರಕ್ಕೆ ಆಹ್ವಾನಿಸುವುದೆಂದು ನಿರ್ಣಯಿಸಲಾಗಿದೆ.
*ದಿ: 19-07-2026 ಆದಿತ್ಯವಾರ ಬೆಳಿಗ್ಗೆ 10:30 ಕ್ಕೆ*
*ಸ್ಥಳ:ಅತಿಶಯ ಕ್ಷೇತ್ರ ಶಿರ್ಲಾಲು ಸೂಡಿ ಬಸದಿ*
ಪಾವನ ಸಾನಿಧ್ಯ ಮತ್ತು ನೇತೃತ್ವ
*ಪ.ಪೂ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀ ಜೈನ ಮಠ, ದಾನಶಾಲೆ, ಕಾರ್ಕಳ*.
ಮಾರ್ಗದರ್ಶನ
*ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು*
*ಧರ್ಮಾಧಿಕಾರಿಗಳು*, *ಶ್ರೀ ಕ್ಷೇತ್ರ ಧರ್ಮಸ್ಥಳ* ಮತ್ತು
*ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಕಳ* ಇವರ ಮುಂದಾಳತ್ವದಲ್ಲಿ ಹಾಗೂ ಎಲ್ಲಾ ಜೈನ ಸಂಘ ಸಂಸ್ಥೆಗಳ ಸಹಯೋಗದಲ್ಲಿ.
ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಬಂಧುಗಳಾದ ಹಾಗೂ ಮುನಿಭಕ್ತರಾದ ತಾವೆಲ್ಲರೂ ಈ ಧರ್ಮಪ್ರಭಾವನಾ ಕಾರ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾಗ ಬೇಕಾಗಿ ವಿನಂತಿ.
*ವಿ.ಸೂ – ಶ್ರಾವಕ ಶ್ರಾವಕಿಯರು ಬೆಳಿಗ್ಗೆ 9:30 ಕ್ಕೆ ಶ್ರೀ ಮಠದಲ್ಲಿ ಉಪಸ್ಥಿತರಿರಬೇಕಾಗಿ ವಿನಂತಿ.ಅಲ್ಲಿಂದ ಎಲ್ಲರೂ ಒಟ್ಟಾಗಿ ಶಿರ್ಲಾಲು ಸೂಡಿ ಬಸದಿಗೆ ಹೊರಡುವುದು*
ಶ್ರೀ ಕ್ಷೇತ್ರ ಜೈನ ಮಠ
ದಾನಶಾಲೆ , ಕಾರ್ಕಳ .




