ಜಿಲ್ಲಾ ಸುದ್ದಿ

ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ.

Share News

ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ.

ಕಳ್ಳತನವಾದ ಒಂದು ರೋಟಾವೇಟರ್, ಒಂದು ಟ್ರ್ಯಾಕ್ಟರ್ 2 ಟ್ರೇಲರ್‌ಗಳು ಮತ್ತು ಒಂದು ವಾಟರ್ ಟ್ಯಾಂಕರ್ ಸೇರಿ ಒಟ್ಟು 8 ಲಕ್ಷ 50 ಸಾವಿರ ರೂ ಮೌಲ್ಯದ ವಸ್ತು ಪತ್ತೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಾದ ಬಸವರಾಜ್ ಹಟ್ಟಿ. ಸುರೇಶ ಡಂಬಳ ಬಂಧಿಸಲಾಗಿದೆ.

ಮುಂಡರಗಿ ಶಹರದ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿರುವ ಶರಣಪ್ಪ ಚನ್ನಬಸಪ್ಪ ಶಡ್ಲಗೇರಿ ಅವರ ಬಯಲು ಜಾಗೆಯಲ್ಲಿ ಇಟ್ಟಿದ್ದ ರೂಟಾವೇಟರ್ ಕಳ್ಳತನವಾದ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು , ಕಳ್ಳತನವಾದ ರೋಟಾವೇಟರ್ ಪತ್ತೆ ಕಾರ್ಯಕ್ಕಾಗಿ ಬಿ.ಎಸ್. ನೇಮಗೌಡ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಇವರ ಆದೇಶದಂತೆ

ವಿಶೇಷ ತಂಡ ರಚನೆ ಮಾಡಿದ್ದು ಎಂ.ಬಿ. ಸಂಕದ ಹೆಚ್ಚುವರಿ ಗದಗ ಪೊಲೀಸ್ ಅಧಿಕ್ಷಕರು,ಹಾಗೂ ಪ್ರಭುಗೌಡ ಕಿರೇದಳ್ಳಿ ಡಿ.ಎಸ್.ಪಿ ನರಗುಂದ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ

ಮಂಜುನಾಥ ಕುಸುಗಲ್ ಪೊಲೀಸ್ ಇನ್ಸಪೆಕ್ಟರ್ ಮುಂಡರಗಿ, ಸುಮಾ ಗೊರಾಬಾಳ ಪಿ.ಎಸ್.ಐ ಮುಂಡರಗಿ ರವರು ನುರಿತ ಸಿಬ್ಬಂದಿಗಳಾದ ಎ.ಎಸ್.ಐ. ರವರಾದ ಎಸ್. ಡಿ ನರ್ತಿ, ವಿ. ವೈ. ತಂಟ್ರಿ, ಡಿ. ಎಮ್. ಹೊನಕೇರಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಜೆ.ಐ ಬಚ್ಚೇರಿ. ಅವಿನಾಶ ಬ್ಯಾಳಿ, ಹೆಚ್.ಕೆ. ನದಾಫ, ಬಸವರಾಜ ಬಣಕಾರ, ಹಾಗೂ ಸಿಬ್ಬಂದಿಗಳಾದ ಮಹೇಶ ಗೊಳಗೊಳಕಿ, ಮಹೇಶ ಹೂಗಾರ ಇತರು ಸೇರಿ ತನಿಖೆ ಆರಂಭಿಸಿದ ತಂಡ ಕಳ್ಳ ತನ ಮಾಡಿದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಭಂದಿತರ ವಿಚಾರಣೆ ನಡೆಸಿದ್ದಾರೆ ಈ ಕಾರ್ಯಕ್ಕೆ ಇಲಾಖೆಯ ಹಾಗೂ ಸಾರ್ವಜನಿಕರು ಸಹ ಹರ್ಷ ವೇಕ್ತ ಪಡಿಸಿದ್ದಾರೆ


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!